March 14, 2025
2025-01-23 at 11.54.11 AM

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ಡ್ರೋನ್​ನ ಅಜಾಗರೂಕ ಬಳಕೆಯ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಡ್ರೋನ್​​ ರಥೋತ್ಸವದ ಮೂರ್ತಿಗೆ ಬಡಿದು, ಸಹಾಯಕ ಅರ್ಚಕರ ಮೇಲೆ ಬಿದ್ದಿದೆ. ತಕ್ಷಣವೇ ಎಚ್ಚೆತ್ತ ಸಹಾಯಕ ಅರ್ಚಕರು ಡ್ರೋನ್​ ಅನ್ನು ಕಾಲಿನಿಂದ ಒತ್ತು ಹಾಕಿ ಕೆಳಗೆ ಹಾಕಿದ್ದಾರೆ.

ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಡ್ರೋನ್​ ಅಪರೇಟರ್​ನ ಅಜಾಗರೂಕತೆಯ ವಿರುದ್ಧ ಸ್ಥಳೀಯರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.