August 5, 2025
Screenshot_20250627_1906062

ಉಡುಪಿ:
ಹೆಚ್ಚಿನ ಲಾಭದ ಭರವಸೆ ನೀಡಿ ಆನ್‌ಲೈನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿ, ಸುಮಾರು 68.3 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿಯಂತೆ, ಅಜಿತ್ ಕುಮಾರ್ ಎಂಬುವವರನ್ನು ‘372 SCBI ಇನ್ವೆಸ್ಟಿಂಗ್ ಲ್ಯಾಬ್’ ಎಂಬ ವಾಟ್ಸಾಪ್ ಗುಂಪಿಗೆ ಅನ್ಯೋನ್ಯ ವ್ಯಕ್ತಿಗಳು ಸೇರಿಸಿದ್ದಾರೆ. ಈ ಗುಂಪಿನ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುವ ಸಂದೇಶಗಳನ್ನು ಕಳುಹಿಸಿ, ಹೆಚ್ಚಿನ ಲಾಭದ ಭರವಸೆ ನೀಡಿದ್ದಾರೆ.

ಅವರ ಮಾತುಗಳನ್ನು ನಂಬಿದ ಅಜಿತ್ ಕುಮಾರ್ ಅವರು ಜೂನ್ 12 ರಿಂದ ಜೂನ್ 23ರ ನಡುವೆ ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ NEFT ಮತ್ತು RTGS ಮೂಲಕ ಒಟ್ಟು 68,30,000 ರೂ.ಗಳನ್ನು ವರ್ಗಾಯಿಸಿದ್ದಾರೆ.

ಆದರೆ, ಹಣ ಪಾವತಿಸಿದ ಬಳಿಕ ಅವರು ಹೂಡಿಕೆಯ ಲಾಭವನ್ನೂ, ಹೂಡಿಸಿದ ಹಣವನ್ನೂ ಹಿಂತಿರುಗಿಸಿಲ್ಲ. ಈ ಮೂಲಕ ದೂರುದಾರರನ್ನು ವಂಚನೆ ಮಾಡಿದ್ದಾರೆ.

ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

error: Content is protected !!