August 6, 2025
Screenshot_20250625_1056042

ಕಡಬ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನೆಲೆ – ರಸ್ತೆ ತಡೆಗೊಳಿಸಿದ ಕಾರ್ಯಕರ್ತರಿಗೆ ನೋಟಿಸ್

ಮೇ 2ರಂದು ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಖಂಡಿಸಿ ವಿ.ಹಿಂ.ಪ. ವತಿಯಿಂದ ಜಿಲ್ಲಾಭಾರತೀಯ ಬಂದ್ ಗೆ ಕರೆ ನೀಡಲಾಗಿತ್ತು. ಈ ಸಂಬಂಧ ಕಡಬದಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು ಪ್ರಮೋದ್ ನಂದುಗುರಿ, ದೇವಿ ಪ್ರಸಾದ್ ಮರ್ದಾಳ, ತಿಲಕ್ ರೈ ನಂದುಗುರಿ, ಮೋಹನ್ ಕೆರೆಕ್ಕೊಡಿ, ರಾಧಾಕೃಷ್ಣ ಕೋಲ್ಪೆ ಮತ್ತು ಪ್ರೇಮಚಂದ್ರ ಅಜ್ಜರಮೂಲೆ ವಿರುದ್ಧ ಪ್ರಕರಣ ದಾಖಲಾಗಿದೆ.

ನೋಟಿಸ್ ವಿವರ:
ಕಡಬ ಠಾಣೆ ಮೇ 3ರಂದು ಪ್ರಕರಣ ದಾಖಲಿಸಿದ್ದು, ಜೂನ್ 23ರಂದು ಆರೋಪಿತರಿಗೆ ನೋಟಿಸ್ ನೀಡಲಾಗಿದೆ. ಮೇ 7ರಂದು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈಗಾಗಲೇ ಆರು ಮಂದಿ ಠಾಣೆಗೆ ಹಾಜರಾಗಿ ಸಹಿ ಮಾಡಿದ್ದಾರೆ.

ಪೋಲೀಸರ ಟಾರ್ಗೆಟ್ ಆರೋಪ:
ಈ ಸಂಬಂಧ ವಿ.ಹಿಂ.ಪ. ಕಡಬ ಪ್ರಖಂಡದ ಕಾರ್ಯದರ್ಶಿ ಪ್ರಮೀಳ ಲೋಕೇಶ್ ಅವರು ಪ್ರತಿಕ್ರಿಯೆ ನೀಡಿದ್ದು, “ಪೊಲೀಸರು ನಿರ್ದಿಷ್ಟ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇತ್ತೀಚಿನ ಎರಡು ಘಟನೆಗಳಲ್ಲಿ ಸಹ ಇವರ ಮೇಲೆ ಕೇಸು ದಾಖಲಿಸಿದ್ದಾರೆ. ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಅವರ ಮನೋಬಲ ಕುಗ್ಗಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಆದರೆ ಇದು ಫಲಿಸದು. ಹಿಂದೂ ಸಮಾಜ ಸಂಘಟಿತರಾಗಿದ್ದು, ನಾವು ಹೋರಾಟ ಮುಂದುವರಿಸುವೆವು. ಪೋಲೀಸರ ಈ ನಡೆ ಖಂಡನೀಯ” ಎಂದು ಹೇಳಿದ್ದಾರೆ.

error: Content is protected !!