August 6, 2025
rain-weather

ರಾಜ್ಯದಲ್ಲಿ ಮುಂದಿನ 2-3 ದಿನ ಭಾರೀ ಮಳೆಯ ಮುನ್ಸೂಚನೆ

ರಾಜ್ಯದ ಹಲವೆಡೆ ಮುಂದಿನ 2-3 ದಿನಗಳಲ್ಲಿ ವರುಣನ ಆರ್ಭಟ ಹೆಚ್ಚಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆರೇಂಜ್ ಅಲರ್ಟ್:
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ನೀರಿಕ್ಷೆಯಿದ್ದು, ಈ ಭಾಗಗಳಿಗೆ ಆರೇಂಜ್ ಅಲರ್ಟ್ ಪ್ರಕಟಿಸಲಾಗಿದೆ.

ಯೆಲ್ಲೋ ಅಲರ್ಟ್:
ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೂ ಮಳೆ ಎಚ್ಚರಿಕೆ ನೀಡಲಾಗಿದೆ.

ಭಾರಿ ಮಳೆಯ ನಿರೀಕ್ಷೆ ಇರುವ ಜಿಲ್ಲೆಗಳು:

  • ಉತ್ತರ ಕನ್ನಡ
  • ದಕ್ಷಿಣ ಕನ್ನಡ
  • ಉಡುಪಿ
  • ಶಿವಮೊಗ್ಗ
  • ಚಿಕ್ಕಮಗಳೂರು
  • ಕೊಡಗು

ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಸಾಧಾರಣ ಮಳೆಯ ನಿರೀಕ್ಷೆ ಇರುವ ಜಿಲ್ಲೆಗಳು:

  • ಬಾಗಲಕೋಟೆ
  • ಬೆಳಗಾವಿ
  • ಬೀದರ್
  • ಧಾರವಾಡ
  • ಗದಗ
  • ಹಾವೇರಿ
  • ಕಲಬುರಗಿ
  • ಕೊಪ್ಪಳ
  • ರಾಯಚೂರು
  • ವಿಜಯಪುರ
  • ಯಾದಗಿರಿ
  • ಬಳ್ಳಾರಿ
  • ಬೆಂಗಳೂರು ನಗರ ಮತ್ತು ಗ್ರಾಮಾಂತರ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ದಾವಣಗೆರೆ
  • ಹಾಸನ
  • ಕೋಲಾರ
  • ಮಂಡ್ಯ
  • ಮೈಸೂರು
  • ರಾಮನಗರ
  • ತುಮಕೂರು
  • ವಿಜಯನಗರ

ಸಾಮಾನ್ಯ ವಾತಾವರಣ:
ಈ ಜಿಲ್ಲೆಗಳಲ್ಲಿ ಹೆಚ್ಚಿನವಾಗಿ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

error: Content is protected !!