August 6, 2025
WhatsApp-Image-2025-06-23-at-23.09.42_48a4e116-696x453

ಆಂಧ್ರಪ್ರದೇಶ: ಮತ್ತೆ ನವ ವಿವಾಹಿತ ಗಂಡನ ಕೊಲೆ!

ಇತ್ತೀಚಿನ ದಿನಗಳಲ್ಲಿ, ನವ ವಿವಾಹಿತ ಗಂಡುಗಳನ್ನು ಅವರೇ ತಮ್ಮ ಪತ್ನಿಯರ ಪ್ರೇಮಿಗಳೊಂದಿಗೆ ಸೇರಿ ಕೊಲ್ಲುತ್ತಿರುವ ಪ್ರಕರಣಗಳು ದೇಶವ್ಯಾಪಿಯಾಗಿ ಬೆಳಕಿಗೆ ಬರುತ್ತಿವೆ. ಈ ಪ್ರಕರಣಗಳು ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ.

ಕೆಲವೇ ದಿನಗಳ ಹಿಂದೆ, ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದ್ದ ರಾಜಾ ರಘುವಂಶಿಯ ಭೀಕರ ಕೊಲೆ ದೇಶದಾದ್ಯಂತ ಚರ್ಚೆಯಾಗಿತ್ತು. ಇದೀಗ ಆಂಥೆಯೇ ಮತ್ತೊಂದು ಘಟನೆ ಆಂಧ್ರಪ್ರದೇಶದ ಗದ್ಮಾಲ್ ಪಟ್ಟಣದಲ್ಲಿ ನಡೆದಿದೆ.

ತೆಲಂಗಾಣದ ಗಾಲ್‌ನ ನಿವಾಸಿ, 32 ವರ್ಷದ ತೇಜೇಶ್ವರ್ ನಂದ್ಯಾಲ್ ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದೆ. ಈ ಬಗ್ಗೆ ಪತ್ನಿ ಮೇಲೆ ಗಂಭೀರ ಅನುಮಾನ ವ್ಯಕ್ತವಾಗಿದೆ. ತೇಜೇಶ್ವರ್ ಮತ್ತು ಐಶ್ವರ್ಯಾ ಕಳೆದ ತಿಂಗಳು ಪ್ರೇಮ ವಿವಾಹ ಮಾಡಿಕೊಂಡಿದ್ದರು.

ಜೂನ್ 17ರಿಂದ ತೇಜೇಶ್ವರ್ ಕಾಣೆಯಾಗಿದ್ದರೆಂದು ಅವರ ಸಹೋದರ ತೇಜವರ್ಧನ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮೊಬೈಲ್ ಟ್ರ್ಯಾಕ್ ಮೂಲಕ ಜೂನ್ 21ರಂದು ಕಾಲುವೆ ಬಳಿ ಅವರ ಶವ ಪತ್ತೆಯಾಯಿತು.

ಪೊಲೀಸ್ ತನಿಖೆಯಲ್ಲಿ ಐಶ್ವರ್ಯಾ ತನ್ನ ಪ್ರಿಯಕರನ ಜೊತೆಗೆ ಸೇರಿ ತೇಜೇಶ್ವರ್‌ನನ್ನು ಕೊಲೆ ಮಾಡಿದ್ದಾಳೆ ಎಂಬ ಶಂಕೆ ಬಲಪಡುತ್ತಿದೆ. ಐಶ್ವರ್ಯಾ ಸ್ಥಳೀಯ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಆಕೆಗೆ ಅಲ್ಲಿ ಕೆಲಸಮಾಡುತ್ತಿದ್ದ ಮ್ಯಾನೇಜರ್‌ನೊಂದಿಗೆ ಅನೈತಿಕ ಸಂಬಂಧವಿದ್ದುದಾಗಿ ತಿಳಿದುಬಂದಿದೆ. ಈ ಸಂಬಂಧ ತೇಜೇಶ್ವರ್ ಅಡ್ಡಿಯಾಗಬಹುದು ಎಂಬ ಕಾರಣದಿಂದ ಈ ಭೀಕರ ಪಾಠವನ್ನು ರೂಪಿಸಿದ್ದಾಳೆ ಎಂಬ ಆರೋಪ ತೇಜವರ್ಧನ್ ಮಾಡಿದ್ದಾರೆ.

error: Content is protected !!