August 5, 2025
ಧರ್ಮಸ್ಥಳ-1-696x365

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿ, ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ನೀಡಿದ್ದಾರೆ.

ಜುಲೈ 4ರಂದು ವಕೀಲರ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದ ಈ ವ್ಯಕ್ತಿ, ಇದೀಗ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳದ ಆಶ್ರಮದಲ್ಲಿ ಪರಿಚಾರಕನಾಗಿ ಕೆಲಸ ನಿರ್ವಹಿಸಿದ್ದ ಈತನ ಹೇಳಿಕೆ ಪ್ರಕಾರ, ಅನಾಥರು ಹಾಗೂ ಅತ್ಯಾಚಾರಕ್ಕೊಳಗಾದ ಹೆಣ್ಮಕ್ಕಳ ಶವಗಳನ್ನು ತನ್ನದೇ ಆದ ಕಾರಣಗಳಿಂದ ದಫನ ಮಾಡಿದ್ದಾನೆ. ಈ ಕುರಿತು ಬರೆದಿದ್ದ ಪತ್ರ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿತ್ತು.

ಪ್ರಸ್ತುತ ಪ್ರಕರಣ ತನಿಖೆ ಹಂತದಲ್ಲಿದ್ದು, ನ್ಯಾಯಾಲಯದಲ್ಲಿ ಈತನ ಹಾಜರಾತಿಯ ನಂತರ ಪ್ರಕರಣ ಇನ್ನಷ್ಟು ತೀವ್ರ ಮತ್ತು ಕುತೂಹಲಕರ ಸ್ವರೂಪ ಪಡೆದುಕೊಂಡಿದೆ.

error: Content is protected !!