August 6, 2025
Screenshot_20250626_1722282-640x603

ಬೈಂದೂರು: ಕೊಲೆ ಪ್ರಕರಣದ ಆರೋಪಿ ಬಂಧನ

ಕೇರಳದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಿರುವುದು ಪತ್ತೆಯಾಗಿ, ಪೊಲೀಸರ ಕೈಯ್ಯಾಲಾಗಿದ್ದಾನೆ.

ಬಂಧಿತನನ್ನು ಕಾಸರಗೋಡು ಜಿಲ್ಲೆಯ ನಿವಾಸಿ ಮೆಲ್ವಿನ್ ಎಂದು ಗುರುತಿಸಲಾಗಿದೆ. ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಗಾಗಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪ್ರಕರಣದ ವಿವರ:

ಈ ದಿನ ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಂ ನಂಬರ್ 573/2025, ಭಾರತೀಯ ನೈತಿಕ ಸಂಹಿತೆಯ 103 ಮತ್ತು 109ರ ಅಡಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 38 ವರ್ಷದ ಮೆಲ್ವಿನ್ (ತಂದೆ ಲೂಯಿಸ್ ಮಾಂಟೆರೋ, ನಿವಾಸ: ನಲ್ಲಂಗಿಪಾದವು, ಮಂಜೇಶ್ವರ, ಕಾಸರಗೋಡು) ಆರೋಪಿಯಾಗಿದ್ದನು.

ತಲೆಮರೆಸಿಕೊಂಡಿದ್ದ ಆತನನ್ನು ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ತೊಡು ಬಯ್ಯಾತಿಯಾನಿ ಎಂಬಲ್ಲಿ ಪತ್ತೆಹಚ್ಚಿ, ಬಂಧಿಸಿ ಮಂಜೇಶ್ವರ ಠಾಣೆಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಬೈಂದೂರು ಠಾಣೆಯ ಪಿಎಸ್ಐ ಶ್ರೀ ತಿಮ್ಮೇಶ್ ಬಿ.ಎನ್., ಕೊಲ್ಲೂರು ಪಿಎಸ್ಐ ಶ್ರೀ ವಿನಯ್ ಕೆ. ಸಿಬ್ಬಂದಿ ನಾಗೇಂದ್ರ (ಕೊಲ್ಲೂರು), ಪರಯ್ಯ ಮಠಪತಿ, ಮಾಳಪ್ಪ ದೇಸಾಯಿ ಮತ್ತು ಚಿದಾನಂದ (ಬೈಂದೂರು ಠಾಣೆ) ಅವರು ಭಾಗವಹಿಸಿದ್ದರು.

error: Content is protected !!