August 5, 2025
Screenshot_20250804_1150342-640x641

ಉಡುಪಿ: ಉಡುಪಿ ನಗರದ ಬಳಿ ಒಬ್ಬ ಕೂಲಿ ಕಾರ್ಮಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಸತೀಶ್ ಎಂದು ತಿಳಿದುಬಂದಿದೆ.

ಘಟನೆಯ ವಿವರ: ಪಿರ್ಯಾದಿದಾರ ಶಾಮಪ್ಪ (38), ಕೊಪ್ಪಳ ಜಿಲ್ಲೆ, ಇವರ ತಮ್ಮ ಸತೀಶ್ (19) ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರು ಪ್ರದೇಶದಲ್ಲಿ ಶೇಖರ ಮೇಸ್ತ್ರಿ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸತೀಶ್ ಉಡುಪಿ ಪರಿಸರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 03/08/2025 ರಂದು, ಸತೀಶ್ ಕೂಲಿ ಕೆಲಸ ಮುಗಿಸಿ ಮಧ್ಯಾಹ್ನ 3:45 ಕ್ಕೆ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಪಿರ್ಯಾದಿದಾರರ ಪತ್ನಿ ಕರಿಮಣಿ ಸರವನ್ನು ಸರಿಪಡಿಸಲು ಅವರ ಮನೆಯ ಪಕ್ಕದಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದರು. ಸ್ವಲ್ಪ ಸಮಯದ ನಂತರ, ಮನೆಯ ಬಳಿ ಬೊಬ್ಬೆ ಹಾಕುವ ಶಬ್ದ ಕೇಳಿಸಿ, ಪಿರ್ಯಾದಿದಾರರ ಪತ್ನಿ ಮನೆಗೆ ಬಂದು ನೋಡಿದಾಗ, ಸತೀಶ್ ಮನೆಯ ಆವರಣದಲ್ಲಿದ್ದ ಫ್ಯಾನಿಗೆ ಸೀರೆಯ ಒಂದು ಭಾಗವನ್ನು ಕಟ್ಟಿ, ಇನ್ನೊಂದು ಭಾಗವನ್ನು ತನ್ನ ಕೊರಳಿಗೆ ನೇಣಾಗಿ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರವನ್ನು ಪಿರ್ಯಾದಿದಾರರ ಪತ್ನಿ ಅವರಿಗೆ ಫೋನ್ ಮಾಡಿ ಸಂಜೆ 4:15 ಕ್ಕೆ ತಿಳಿಸಿದರು. ಪಿರ್ಯಾದಿದಾರರು ಮನೆಗೆ ಬಂದು ಸತೀಶ್ ಅನ್ನು ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ವೈದ್ಯರು ಪರೀಕ್ಷಿಸಿದ ನಂತರ, ದಾರಿಯಲ್ಲೇ ಅವರು ಮೃತರಾಗಿದ್ದರೆಂದು ಸಂಜೆ 4:40 ಕ್ಕೆ ದೃಢಪಡಿಸಿದರು.

ಮೃತರಾದ ಸತೀಶ್ ಮದ್ಯಪಾನ ವ್ಯಸನಿಯಾಗಿದ್ದರು. ಮದ್ಯಪಾನ ಮತ್ತು ಮಾನಸಿಕ ಖಿನ್ನತೆ ಅಥವಾ ಇತರ ಕಾರಣಗಳಿಂದಾಗಿ ಅವರು ನೇಣು ಹಾಕಿಕೊಂಡಿರಬಹುದು ಎಂದು ಊಹಿಸಲಾಗಿದೆ.

error: Content is protected !!