
ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ನಡಿಯುತ್ತಿರುವ ಸಮಯದಲ್ಲಿ ಕಾರ್ಕಳದ ಬಜಗೋಳಿ ನಿವಾಸಿ ಸುಶಾಂತ್ ಅವರಿಗೆ ಪಾಕಿಸ್ತಾನ ನಂಬರ್ನಿಂದ ವಾಟ್ಸಪ್ ಸಂದೇಶ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಬೆಳಗ್ಗೆ 10:24ಕ್ಕೆ “ಹೌ ಆರ್ ಯು” ಎಂಬ ಸಂದೇಶ ವ್ಯಕ್ತಿಯೋರ್ವನಿಂದ ಬಂದಿದ್ದು, ಗಡಿಯಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಆತಂಕಗೊಂಡ ಸುಶಾಂತ್ ತಕ್ಷಣವಾಗಿ ನಂಬರ್ನ್ನು ಬ್ಲಾಕ್ ಮಾಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಂತಹ ಯಾವುದೇ ಸಂದೇಶಗಳಿಗೆ ರಿಯಾಕ್ಟ್ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ.